ಗಣಪತಿ ಕೆರೆಹಬ್ಬ-2022 ರ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

ಗಣಪತಿ ಕೆರೆಹಬ್ಬ-2022 ರ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.
ಈ ಸಂದರ್ಭದಲ್ಲಿ ಸಾಗರದ ಬಿ.ಹೆಚ್ ರಸ್ತೆಯ ಅಗಲೀಕರಣ ಕಾಮಗಾರಿ ಚತುಷ್ಪಥ ರಸ್ತೆಯ ಭೂಮಿ ಪೂಜೆಯನ್ನು ಶಾಸಕರಾದ ಶ್ರೀ ಹೆಚ್ ಹಾಲಪ್ಪನವರೊಂದಿಗೆ ನೆರವೇರಿಸಲಾಯಿತು.
(ರಾಷ್ಟ್ರೀಯ ಹೆದ್ದಾರಿ 206(69) ತುಮಕೂರು – ಹೊನ್ನಾವರ ರಸ್ತೆಯ ಕಿ.ಮೀ 278 ರಿಂದ 286.40 ವರೆಗೆ ಸಾಗರ ನಗರ ವ್ಯಾಪ್ತಿಯ 4 ಪಥದ ರಸ್ತೆಯಿಂದ ನಿರ್ಮಾಣವಾಗಲಿದೆ. [ 77.19 ಕೋಟಿ ] )
ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ. ಡಿ. ಮೇಘರಾಜ್, ಸಾಗರ ನಗರಸಭೆ ಅಧ್ಯಕ್ಷರಾದ ಮಧುರ ಶಿವಾನಂದ, ಉಪ ವಿಭಾಗಧಿಕಾರಿ ನಾಗರಾಜ್, ನಗರ ಸಭೆಯ ಸದಸ್ಯರು,
ತಾಲೂಕು ಅಧಿಕಾರಿಗಳು ಅಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



Leave a Reply