ಶಿಕಾರಿಪುರ ತಾಲ್ಲೂಕಿನ ಹುಲಗಿನ ಕಟ್ಟೆ ಮತ್ತು ಹಾರೋಗೊಪ್ಪ ಗ್ರಾಮದಲ್ಲಿ ಕಂದಾಯ ದಾಖಲೆಗಳನ್ನು ರೈತರ-ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಿಕಾರಿಪುರ ತಾಲ್ಲೂಕಿನ ಹುಲಗಿನ ಕಟ್ಟೆ ಮತ್ತು ಹಾರೋಗೊಪ್ಪ ಗ್ರಾಮದಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಯಾದ ಕಂದಾಯ ದಾಖಲೆಗಳನ್ನು ರೈತರ-ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮಕ್ಕೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪನವರ ಜೊತೆ ಚಾಲನೆ ನೀಡಲಾಯಿತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಚೆನ್ನವೀರಪ್ಪ, ತಹಶೀಲ್ದಾರ್ ಕವಿರಾಜ್, ಉಪ ವಿಭಾಗಧಿಕಾರಿ ನಾಗರಾಜ್, ಕುಮಾರ್ ಗೌಡ್ರು, ಕೊರಳಲ್ಲಿ ನಾಗರಾಜ್
ಹಾರೋಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಬ್ರಮಣ್ಯ, ಶ್ರೀಧರ್, ಶ್ರೀಮತಿ ಗಾಯತ್ರಿ ಬಾಯಿ ಮತ್ತಿತರರು ಉಪಸ್ಥಿತರಿದ್ದರು.



Leave a Reply